ರಾಜ್ಯದಲ್ಲಿಂದು 801ಮಂದಿಗೆ ಕೊರೋನ ದೃಢ, 15 ಮಂದಿ ಸಾವು
ಬೆಂಗಳೂರು, ಸೆ. 11: ರಾಜ್ಯದಲ್ಲಿ ಶನಿವಾರ 801 ಹೊಸ ಕೊರೋನ ಪ್ರಕರಣಗಳು ದೃಢವಾಗಿವೆ. 15 ಜನರು ಸೋಂಕಿಗೆ ಬಲಿಯಾಗಿದ್ದು, 1,142 ಜನರು ಗುಣಮುಖರಾಗಿದ್ದಾರೆ.
ರಾಜ್ಯದಲ್ಲಿ ಈಗಾಗಲೇ ಒಟ್ಟು ಸೋಂಕಿತರ ಸಂಖ್ಯೆ 29,60,932ಕ್ಕೆ ತಲುಪಿದೆ. ಇಲ್ಲಿಯವರೆಗೆ ಒಟ್ಟು ಸಾವಿನ ಸಂಖ್ಯೆ 37,487ಕ್ಕೆ ತಲುಪಿದೆ.
ಒಟ್ಟು ಸಕ್ರಿಯ ಕೊರೋನ ಪ್ರಕರಣ ಸಂಖ್ಯೆ 16,672ಕ್ಕೆ ಏರಿಕೆಯಾಗಿದ್ದು, ಇವರೆಲ್ಲ ಸೋಂಕಿತರು ಆಸ್ಪತ್ರೆ, ಕೊರೋನ ಕೇರ್ ಸೆಂಟರ್ ಹಾಗೂ ಮನೆಗಳಲ್ಲಿ ಚಿಕಿತ್ಸೆ ಮತ್ತು ಆರೈಕೆಯಲ್ಲಿದ್ದಾರೆ.
15 ಸೋಂಕಿತರು ಬಲಿ: ಬೆಂಗಳೂರು ನಗರ-2, ಚಾಮರಾಜನಗರ-1, ದಕ್ಷಿಣ ಕನ್ನಡ 4, ಧಾರವಾಡ-1, ಚಿಕ್ಕಮಗಳೂರು-4 ಕೊಡಗು-1, ಮೈಸೂರು-2 ಸೇರಿ ಒಟ್ಟು 10 ಮಂದಿ ಅಸುನೀಗಿದ್ದಾರೆ.
ಎಲ್ಲೆಲ್ಲಿ ಎಷ್ಟು: ರಾಜ್ಯದಲ್ಲಿ ಹೊಸದಾಗಿ 801 ಪ್ರಕರಣಗಳು ದೃಢವಾಗಿದ್ದು, ಅದರಲ್ಲಿ ಬಳ್ಳಾರಿ 4, ಬೆಳಗಾವಿ 93, ಬೆಂಗಳೂರು ಗ್ರಾ. 6, ಬೆಂಗಳೂರು ನಗರ 207, ಚಾಮರಾಜನಗರ 6, ಚಿಕ್ಕಮಗಳೂರು 39, ಚಿತ್ರದುರ್ಗ 2, ದಕ್ಷಿಣ ಕನ್ನಡ 133, ದಾವಣಗೆರೆ 8, ಧಾರವಾಡ 1, ಹಾಸನ 17, ಕಲಬುರಗಿ 6, ಕೊಡಗು 59, ಕೋಲಾರ 2, ಕೊಪ್ಪಳ 1, ಮಂಡ್ಯ 12, ಮೈಸೂರು 47, ಶಿವಮೊಗ್ಗ 30, ತುಮಕೂರು 26, ಉಡುಪಿ 86, ಉತ್ತರ ಕನ್ನಡ ಜಿಲ್ಲೆಯಲ್ಲಿ 11 ಪ್ರಕರಣ ಪತ್ತೆಯಾಗಿವೆ.
0 التعليقات: