ಗುಜರಾತ್ ನಲ್ಲಿ ಭೀಕರ ಅಪಘಾತ :
8 ಮಂದಿ ಸ್ಥಳದಲ್ಲೇ ಸಾವು, 4 ಜನರಿಗೆ ಗಂಭೀರ ಗಾಯ
ಗುಜರಾತ್ : ಅಮ್ರೇಲಿ ಜಿಲ್ಲೆಯ ಸವರ್ಕುಂಡ್ಲಾದ ಬರ್ಹಾಡಾ ಗ್ರಾಮದ ಬಳಿ ಗುಡಿಸಲುಗಳಲ್ಲಿ ಮಲಗಿದ್ದ ಜನರ ಮೇಲೆ ಟ್ರಕ್ ಹರಿದ ಪರಿಣಾಮ 8 ಜನರು ಸಾವನ್ನಪ್ಪಿದ್ದು, 4 ಕ್ಕೂ ಹೆಚ್ಚು ಜನರು ಗಾಯಗೊಂಡಿರುವ ಘಟನೆ ನಡೆದಿದೆ.
ಅಮ್ರೇಲಿ ಜಿಲ್ಲೆಯ ಸಾವರ್ ಕುಂಡ್ಲಾ ತಾಲ್ಲೂಕಿನ ಬಡ್ಡಾ ಗ್ರಾಮದ ಬಳಿ ರಸ್ತೆಯ ಬದಿಯಲ್ಲಿರುವ ಕೆಲವು ಕುಟುಂಬಗಳು ಮಲಗಿದ್ದಾಗ ಇದ್ದಕ್ಕಿದ್ದಂತೆ ಟ್ರಕ್ ಬಂದು ದುರಂತ ಅಪಘಾತಕ್ಕೀಡಾತು. ಸ್ಥಳದಲ್ಲೇ ಎಂಟು ಮಂದಿ ಮೃತಪಟ್ಟಿದ್ದು, 4ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದು, ಚಿಕಿತ್ಸೆಗಾಗಿ ಸ್ಥಳಾಂತರಿಸಲಾಗಿದೆ. ಘಟನೆ ವರದಿಯಾದ ತಕ್ಷಣ ಪೊಲೀಸ್ ಬೆಂಗಾವಲು ಪಡೆ ಸ್ಥಳಕ್ಕೆ ತಲುಪಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ.
ಘಟನೆಯ ನಂತರ, ಮುಖ್ಯಮಂತ್ರಿ ವಿಜಯ್ ರೂಪಾನಿ ಅವರು ಮೃತರ ಕುಟುಂಬಗಳಿಗೆ ಸಂತಾಪ ಸೂಚಿಸುವುದಾಗಿ ಟ್ವೀಟ್ ಮಾಡಿದ್ದಾರೆ ಮತ್ತು ಮೃತರ ಕುಟುಂಬಗಳಿಗೆ 4ಲಕ್ಷ ರೂ.ಗಳ ಸಹಾಯವನ್ನು ಘೋಷಿಸಿದ್ದಾರೆ.
0 التعليقات: