ವೀರಮಂಗಲ: ರೈಲು ಸಂಚರಿಸುತ್ತಿದ್ದ ವೇಳೆ ಹಳಿಗೆ ದರೆ ಕುಸಿತ: ಸಂಚಾರ ಸ್ಥಗಿತ
ಪುತ್ತೂರು: ರೈಲು ಸಂಚರಿಸುತ್ತಿದ್ದಂತೆಯೇ ದರೆ ಕುಸಿದು ಮಣ್ಣು ಹಳಿ ಮೇಲೆ ಬಿದ್ದ ಘಟನೆ ಪುತ್ತೂರು-ಕಬಕ-ಸುಬ್ರಹ್ಮಣ್ಯ ರೈಲ್ವೆ ಹಳಿಯ ನಡುವೆ ವೀರಮಂಗಲ ಎಂಬಲ್ಲಿ ಇಂದು ಬೆಳಗ್ಗೆ ನಡೆದಿರುವುದು ವರದಿಯಾಗಿದೆ.
ಪ್ರಯಾಣಿಕರ ಲೋಕಲ್ ರೈಲು ಈ ಹಳಿಯಲ್ಲಿ ಸಂಚರಿಸುತ್ತಿದ್ದ ವೇಳೆ ವೀರಮಂಗಲ ಗಡಿಪಿಲಿ ಎಂಬಲ್ಲಿ ಏಕಾಏಕಿ ಪಕ್ಕದ ದರೆ ಕುಸಿದಿದೆ. ಇದರಿಂದ ಮಣ್ಣು ರೈಲಿನ ಮುಂಭಾಗಕ್ಕೆ ಬಿದ್ದಿದ್ದು, ರೈಲಿನ ಗಾರ್ಡ್ ಗೆ ಹಾನಿಯಾಗಿದೆ ಎಂದು ತಿಳಿದುಬಂದಿದೆ.
ಈ ಹಿನ್ನೆಲೆಯಲ್ಲಿ ರೈಲು ಸಂಚಾರ ಸ್ಥಗಿತಗೊಂಡಿದೆ. ಸ್ಥಳಕ್ಕೆ ರೈಲ್ವೆ ಅಧಿಕಾರಿಗಳು ಆಗಮಿಸಿದ್ದು, ಮಣ್ಣು ತೆರವು ಕಾರ್ಯಾಚರಣೆ ಆರಂಭಿಸಿದ್ದಾರೆ ಎಂದು ತಿಳಿದುಬಂದಿದೆ.
0 التعليقات: