ಅಡ್ಯಾರ್ ಕೆಎಚ್ಕೆ ಅಬ್ದುಲ್ ಕರೀಂ ಹಾಜಿಯವರ ಪುತ್ರಿ ಲೈಲಾ ಆಫಿಯಾ ಹೃದಯಾಘಾತದಿಂದ ನಿಧನ
ಮಂಗಳೂರು(01-03-2021): ನಿನ್ನೆ ವಿವಾಹವಾಗಿದ್ದ ಮದುಮಗಳು ಹೃದಯಾಘಾತದಿಂದ ಮೃತಪಟ್ಟಿರುವ ದಾರುಣ ಘಟನೆ ಅಡ್ಯಾರ್ ಕಣ್ಣೂರು ಸಮೀಪದ ಬೀರ್ಪುಗುಡ್ಡೆ ಬಳಿ ನಡೆದಿದೆ.
ಅಡ್ಯಾರ್ ಬೀರ್ಪುಗುಡ್ಡೆ ಜಮಾಅತ್ ಅಧ್ಯಕ್ಷರೂ ಪ್ರಮುಖ ಉದ್ಯಮಿಯೂ ಮತ್ತು ಕೊಡುಗೈ ದಾನಿಯೂ ಆಗಿರುವ ಕೆಎಚ್ಕೆ ಅಬ್ದುಲ್ ಕರೀಂ ಹಾಜಿ ಯವರ ಪುತ್ರಿ ಲೈಲಾ ಆಫಿಯಾ(23) ಮೃತ ದುರ್ದೈವಿ.
ನಿನ್ನೆ, ಲೈಲಾ ಆಫಿಯಾ ರವರ ವಿವಾಹ ಕಣ್ಣೂರಿನ ಮುಬಾರಕ್ ಎಂಬವರೊಂದಿಗೆ ನಡೆದಿದ್ದು, ಅಡ್ಯಾರ್ ಗಾರ್ಡನ್ನಲ್ಲಿ ಔತಣಕೂಟವೂ ಏರ್ಪಡಿಸಲಾಗಿತ್ತು. ಆ ಬಳಿಕ ನವಜೋಡಿಗಳು ಲೈಲಾ ಆಫಿಯಾ ರವರ ಮನೆಯಲ್ಲಿದ್ದರು. ಇಂದು ಬೆಳಿಗ್ಗಿನ ಜಾವ 3ಗಂಟೆಗೆ ಲೈಲಾ ಆಫಿಯಾ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ವಧುವಿನ ಅಕಾಲಿಕ ಮರಣದಿಂದಾಗಿ ಮದುವೆ ಮನೆಯಲ್ಲಿ ಬೇಸರದ ಛಾಯೆ ಮೂಡಿದೆ. ಇಂದು ಲುಹ್ರ್ ನಮಾಝಿನ ಬಳಿಕ ಧಫನ ಮಾಡಲಾಗುವುದು ಎಂದು ತಿಳಿದು ಬಂದಿದೆ.
0 التعليقات: