31ನೇ ಜಿಲ್ಲೆಯಾಗಿ ವಿಜಯನಗರ | ಸರಕಾರದಿಂದ ಅಧಿಕೃತ ಘೋಷಣೆ
ಬೆಂಗಳೂರು : ವಿಜಯನಗರ ಇದೀಗ ರಾಜ್ಯದ 31ನೇ ಜಿಲ್ಲೆಯಾಗಿ ಅಧಿಕೃತವಾಗಿ ಘೋಷಿಸಲ್ಪಟ್ಟಿದೆ. ಈ ಬಗ್ಗೆ ರಾಜ್ಯ ಸರಕಾರ ಸೋಮವಾರ ಅಧಿಕೃತ ರಾಜಪತ್ರ ಪ್ರಕಟಿಸಿದೆ.
ಬಳ್ಳಾರಿ ಜಿಲ್ಲೆಯನ್ನು ವಿಭಜಿಸಿ ಆರು ತಾಲೂಕುಗಳನ್ನೊಳಗೊಂಡ ಪ್ರತ್ಯೇಕ ವಿಜಯನಗರ ಜಿಲ್ಲೆಯನ್ನು ಅಧಿಕೃತಗೊಳಿಸಲಾಗಿದೆ.
ನೂತನ ಜಿಲ್ಲೆಯಲ್ಲಿ ಹೂವಿನ ಹಡಗಲಿ, ಹಗರಿ ಬೊಮ್ಮನಹಳ್ಳಿ, ಹೊಸಪೇಟೆ, ಕೊಟ್ಟೂರು, ಹರಪನಹಳ್ಳಿ, ಕೂಡ್ಲಿಗಿ ತಾಲೂಕುಗಳಿರಲಿವೆ. ಹೊಸಪೇಟೆ ಜಿಲ್ಲಾ ಕೇಂದ್ರವಾಗಿರಲಿದೆ.
ಇನ್ನು ಬಳ್ಳಾರಿ ಜಿಲ್ಲೆಯಲ್ಲಿ ಸಿರಗುಪ್ಪ, ಬಳ್ಳಾರಿ, ಸಂಡೂರು, ಕುರುಗೋಡು ಹಾಗೂ ಕಂಪ್ಲಿ ತಾಲೂಕುಗಳಿರಲಿವೆ. ಜಿಲ್ಲಾ ಕೇಂದ್ರವಾಗಿ ಬಳ್ಳಾರಿ ಮುಂದುವರಿಯಲಿದೆ.
0 التعليقات: