ರಾಜ್ಯದ ಎಲ್ಲ ಕಲ್ಲುಕ್ವಾರಿಗಳ ಸರ್ವೆ ನಡೆಸಿ, 1 ತಿಂಗಳೊಳಗೆ ವರದಿ ನೀಡಲು ರಾಜ್ಯ ಸರ್ಕಾರಕ್ಕೆ 'ಹೈಕೋರ್ಟ್' ಸೂಚನೆ
ಬೆಂಗಳೂರು : ಶಿವಮೊಗ್ಗ ಕಲ್ಲುಕ್ವಾರಿಯಲ್ಲಿ ಸ್ಪೋಟಕದ ನಂತ್ರ, ತುಮಕೂರಿನಲ್ಲೂ ನೆ ಜಿಲೆಟಿನ್ ಕಡ್ಡಿ ಸ್ಪೋಟಗೊಂಡಿತ್ತು. ಇದಾದ ಬಳಿಕ ಪ್ರಕರಣವೊಂದರ ಸಂಬಂಧ ವಿಚಾರಣೆ ಕೈಗೆತ್ತಿಕೊಂಡಿರುವಂತ ಹೈಕೋರ್ಟ್ ವಿಭಾಗೀಯ ಪೀಠವು, ರಾಜ್ಯದ ಎಲ್ಲಾ ಕಲ್ಲುಕ್ವಾರಿಗಳ ಸರ್ವೆ ನಡೆಸಿ, ಒಂದು ತಿಂಗಳ ಒಳಗೆ ವರದಿ ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ಸೂಚಿಸಿದೆ.
ಬುಧವಾರ ಪ್ರಕರಣವೊಂದರ ಕುರಿತಂತೆ ವಿಚಾರಣೆ ಕೈಗೆತ್ತಿಕೊಂಡ ರಾಜ್ಯ ಹೈಕೋರ್ಟ್ ನ ವಿಭಾಗೀಯ ಪೀಠವು, ಕಲ್ಲು ಕ್ವಾರಿಯಿಂದಾಗಿ ಪರಿಸರದ ಮೇಲೆ ದುಷ್ಪರಿಣಾಮ ಉಂಟಾಗುತ್ತಿದೆ ಎಂಬುದಾಗಿ ಕಳವಳ ವ್ಯಕ್ತ ಪಡಿಸಿತು. ಅಲ್ಲದೇ ಕ್ವಾರಿಗಳಲ್ಲಿ ನಿಯಮ ಪಾಲಿಸಲಾಗುತ್ತಿದೆಯೇ.? ನಿಯಮ ಪಾಲಿಸದ ಕ್ವಾರಿಗಳ ಮೇಲೆ ಕ್ರಮವೇನು ಎಂಬುದಾಗಿ ರಾಜ್ಯ ಸರ್ಕಾರವನ್ನು ಪ್ರಶ್ನಿಸಿತು.
ಈ ಸಂದರ್ಭದಲ್ಲಿ ರಾಜ್ಯ ಸರ್ಕಾರದ ಪರ ವಕೀಲರು, ಹೈಕೋರ್ಟ್ ವಿಭಾಗೀಯ ಪೀಠಕ್ಕೆ ರಾಜ್ಯದಲ್ಲಿರುವಂತ ಕಲ್ಲುಕ್ವಾರಿಗಳ ಬಗ್ಗೆ ಸರ್ವೇ ನಡೆಸುತ್ತಿರುವುದಾಗಿ ಮಾಹಿತಿ ನೀಡಿದರು. ಹೀಗಾಗಿ ರಾಜ್ಯದಲ್ಲಿನ ಕಲ್ಲುಕ್ವಾರಿಗಳ ಬಗ್ಗೆ ಸರ್ವೆ ನಡೆಸಿ, ಒಂದು ತಿಂಗಳಲ್ಲಿ ವರದಿ ಸಲ್ಲಿಸುವಂತೆ ಸೂಚಿಸಿದಂತ ನ್ಯಾಯಪೀಠವು, ಮಾರ್ಚ್ 8ಕ್ಕೆ ವಿಚಾರಣೆಯನ್ನು ಮುಂದೂಡಿತು.
0 التعليقات: