'ನಟ ದಿಲೀಪ್' ಲೈಂಗಿಕ ದೌರ್ಜನ್ಯ ಪ್ರಕರಣ : 'ಸುಪ್ರೀಂ ಕೋರ್ಟ್'ನಿಂದ ಮಹಿಳಾ ನ್ಯಾಯಾಧೀಶೆ ಬದಲಾವಣೆ ಅರ್ಜಿ ವಜಾ
ನವದೆಹಲಿ : ನಟ ದಿಲೀಪ್ ಅಪಹರಣ ಮತ್ತು ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ವಿಚಾರಣೆ ನಡೆಸುತ್ತಿರುವ ವಿಚಾರಣಾ ನ್ಯಾಯಾಲಯದಲ್ಲಿನ ಮಹಿಳಾ ನ್ಯಾಯಾಧೀಶರನ್ನು ಬದಲಾವಣೆ ಮಾಡುವಂತೆ ಕೇರಳ ಸರ್ಕಾರ ಸಲ್ಲಿಸಿದ್ದ ಮನವಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ.
ದಿಲೀಪ್ ವಿರುದ್ಧದ ಲೈಂಗಿಕ ದೌರ್ಜನ್ಯ ಆರೋಪಗಳನ್ನು ವಿಚಾರಣೆ ನಡೆಸುತ್ತಿರುವ ವಿಚಾರಣಾ ನ್ಯಾಯಾಲಯದ ನ್ಯಾಯಾಧೀಶೆ ವಿರುದ್ಧ ರಾಜ್ಯ ಸರ್ಕಾರ ಪಕ್ಷಪಾತ ಆರೋಪ ಹೊರಿಸಲಾಗಿದೆ. ಈ ಆರೋಪಗಳು ಅನಗತ್ಯ ಎಂದು ಉನ್ನತ ನ್ಯಾಯಾಲಯ ಹೇಳಿದೆ.
ಈ ಪ್ರಕರಣದ 10 ಆರೋಪಿಗಳಲ್ಲಿ ನಟ ದಿಲೀಪ್ ಕೂಡ ಒಬ್ಬವಾಗಿದ್ದು, ಮಹಿಳೆಯನ್ನು ಅಪಹರಿಸಿ ಹಲ್ಲೆ ನಡೆಸಲು ಸಂಚು ರೂಪಿಸಿದ ಆರೋಪ ಅವರ ಮೇಲಿದೆ.
0 التعليقات: